I ಸಾಗರದ ಪತ್ರಕರ್ತ I ಉಮೇಶ್ ಮೊಗವೀರ ನಿಧನ I ಕೆಯುಡಬ್ಲ್ಯೂಜೆ ಸಂತಾಪ I

I ಸಾಗರದ ಪತ್ರಕರ್ತ I ಉಮೇಶ್ ಮೊಗವೀರ ನಿಧನ I ಕೆಯುಡಬ್ಲ್ಯೂಜೆ ಸಂತಾಪ I 

ಸಾಗರ : ತಾಲೂಕಿನ ಯುವ ಪತ್ರಕರ್ತ ಉಮೇಶ್ ಮೊಗವೀರ(40) ಇಂದು ನಿಧನರಾಗಿದ್ದಾರೆ.
     ಇವರು ಟೈಮ್ಸ್ ಆಫ್ ಕರ್ನಾಟಕ ಪತ್ರಿಕೆ ಸಾಗರ ವರದಿಗಾರರಾಗಿ ಕೆಲ ವರ್ಷ ಸೇವೆ ಸಲ್ಲಿಸಿದ್ದರು. ಪ್ರಸ್ತುತ ತಮ್ಮದೇ ಆದ ವೆಬ್ ಚಾನಲ್ ನಡೆಸುತ್ತಿದ್ದರು.
    
     ಕಳೆದ ಕೆಲ ತಿಂಗಳಿಂದ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಇಂದು ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ.

    ಕಳೆದ ತಿಂಗಳು ಶಿವಮೊಗ್ಗದ ಮೆಟ್ರೋ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ kuwj ಜಿಲ್ಲಾ ಅಧ್ಯಕ್ಷರಾದ ಕೆ.ವಿ. ಶಿವಕುಮಾರ್ ಹಾಗೂ ಪದಾಧಿಕಾರಿಗಳು  ಸಂಘದಿಂದ ಹಾಗೂ ವ್ಯಯಕ್ತಿಕವಾಗಿ ಆರ್ಥಿಕ ಸಹಾಯ ಮಾಡಿ ಉತ್ತಮ ಚಿಕಿತ್ಸೆ ಕೊಡಿಸಿದ್ದನ್ನು‌ ಇಲ್ಲಿ ಸ್ಮರಿಸಬಹುದು.

     ಸಾಗರ ತಾಲೂಕು ಸಂಘದಿಂದಲೂ ಆರ್ಥಿಕ ಸಹಾಯ ಮಾಡಿ ಚಿಕಿತ್ಸಾ ವೆಚ್ಚ ಭರಿಸಲಾಗಿತ್ತು. ಮೊಗವೀರ ಒಂದು ಹಂತಕ್ಕೆ ಗುಣಮುಖರಾಗಿದ್ದರು.
ಆದರೆ ಅಂತಿಮವಾಗಿ ವಿಧಿ ಅವರನ್ನು ಕರೆದೊಯ್ದಿದೆ. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

     ಸಂತಾಪ:  ಉಮೇಶ್ ಮೊಗವೀರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ. ಶಿವಕುಮಾರ್, ರಾಜ್ಯ ಸಮಿತಿ ಸದಸ್ಯ ಎನ್. ರವಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

Comments